ಅಮವಾಸ್ಯೆಯ ಸೆರಗು ಮುಸ್ಸಂಜೆ
ವಿಮಾನ ಏರುವುದು ಸಮುದ್ರ ದಾಟುವುದು
ಬೇಡವೇ ಬೇಡ
ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ-
ವೀಸಾದ ಕೊನೆಯ ದಿನಾಂಕ
ನೋಡು ಅಮ್ಮ ಹೊರಡಲೇಬೇಕು
ಹೊಸ್ತಿಲಿನ ಮೇಲಿರುವ
ನನ್ನ ಅಸಹಾಯಕತೆ-
ಅಪ್ಪನ ಧೈರ್ಯದ ಮಾತುಗಳು
ಎರುಡು ದಿನಗಳಿಂದ ನನ್ನವನ ಸಮುದ್ರದಬ್ಬರ
ಒಂದೇ ಸಮನೆ ಫೋನಕಾಲ್ಸ್
ಪಾಸ್ಪೋರ್ಟ್ ಟಿಕೇಟ್ ಸರಿಯಾಗಿಟ್ಟುಕೊ
ಏರ್ಪೋರ್ಟ ಟ್ಯಾಕ್ಸ್ಗೆ ದುಡ್ಡುಕಟ್ಟಬೇಕು
ಸೂಟ್ ಕೇಸಿಗೆ ಮೂವತ್ತೇ ಕೆ.ಜಿ ಸಾಮಾನು
ಹೆಚ್ಚಾದುದು ಹೆಗಲಿಗೇರಿಸಬೇಡ
ಮಗುವಿಗೆ ಬೆಚ್ಚನೆಯ ಉಡುಪು
ನಿನಗೊಂದು ಸ್ವೆಟ್ಟರ್ ಮಾತ್ರ
ಎಮರ್ಜನ್ಸಿಗೆ ಬಗಲಚೀಲದಲ್ಲಿರಲಿ,
ಟ್ರಾನ್ಸಿಟ್ ಇದೆ ತುಂಬಾಚಳಿ-
ಭಾರವಾದರೂ ಮಗುವನ್ನು ಎತ್ತಿಕೊಂಡೇ ಇರು
ವಿಂಡೋ ಸೀಟು
ಸಾಧ್ಯವಾದಷ್ಟು ಆಕಾಶ ಸಮುದ್ರ ನೋಡು
ಓ.ಕೆ ಹ್ಯಾಪಿಜರ್ನಿ—ಕಟ್
ಮಗುವಿಗೆ ಡೈಫರ್ ಹಾಕಿ
ಅಮ್ಮನ ಕಾಲು ಬಿದ್ದು ಹೊರಟ ಕ್ಷಣ
ಕಣ್ತುಂಬ ನೀರು ಕಾಣದಂತೆ ಒರೆಸಿ
ಮುಗುಳ್ನಕ್ಕು ಕೈ ಬೀಸಿದೆ…..
೩೧-೧೨-೧೯೭೯
*****
Related Post
ಸಣ್ಣ ಕತೆ
-
ನಾಗನ ವರಿಸಿದ ಬಿಂಬಾಲಿ…
ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…
-
ಮನೆಮನೆಯ ಸಮಾಚಾರ
ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…
-
ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು
ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…